‘ಬೆಳಿಗ್ಗೆ 7ರ ಸುಮಾರಿಗೆ ಹಣಮಂತರಾಯ ಹೊಲಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಅದೇ ಗ್ರಾಮದ ಆರೋಪಿ ನಿಂಗಪ್ಪ ಮಚ್ಚಿನಿಂದ ಮುಖ, ತಲೆಗೆ ಹೊಡೆದು ಗಾಯಗೊಳಿಸಿದ. ರಕ್ತದ ಮಡುವಿನಲ್ಲಿ ಬಿದ್ದ ಹಣಮಂತರಾಯ ಅವರನ್ನು ಶಹಾಪುರ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರು’ ಎಂದು ಗೋಗಿ ಠಾಣೆಯ ಪಿಎಸ್ಐ ಕೃಷ್ಣಾ ಸುಬೇದಾರ ತಿಳಿಸಿದ್ದಾರೆ.