ಬಿಜೆಪಿಯವರು ‘ಪರಿವರ್ತನ ಯಾತ್ರೆ’ ಕೈಗೊಂಡಿದ್ದಾರೆ. ಯಾವ ಪರಿವರ್ತನೆಗಾಗಿ ಈ ಯಾತ್ರೆ? ಮತಗಳ ಪರಿವರ್ತನೆಗೋ? ಅಭಿವೃದ್ಧಿಯ ಸ್ಥಿತಿಗತಿಯನ್ನು ಉತ್ತಮಪಡಿಸುವುದಕ್ಕೋ? ಪ್ರತಿ ದಿನವೂ ರಾಜ್ಯ ಸರ್ಕಾರದ ಒಂದೊಂದು ಭ್ರಷ್ಟಾಚಾರ ಪ್ರಕರಣವನ್ನು ಬಯಲು ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ (ಪ್ರ.ವಾ., ನ.2). ಅಂದರೆ, ರಾಜ್ಯ ಸರ್ಕಾರದ ಭ್ರಷ್ಟಚಾರಗಳು ಈಗ ನೆನಪಾದವೇ ಅಥವಾ ಇಲ್ಲಿಯವರೆಗೂ ನಿಮಗೆ ಬಿಡುವಿರಲಿಲ್ಲವೇ?