ಶ್ರವಣಬೆಳಗೊಳ: ಮಹಾ ಮಸ್ತಕಾಭಿಷೇಕದ ಅಂಗವಾಗಿ ನಡೆಯುತ್ತಿರುವ ಒಳ ಚರಂಡಿ ಮತ್ತು ನೀರು ಸರಬರಾಜು ದುರಸ್ತಿ ಕಾಮಗಾರಿ ವೇಗ ಪಡೆದುಕೊಂಡಿದೆ. ಅಂದಾಜು ₹15 ಕೋಟಿ ವೆಚ್ಚದಲ್ಲಿ 2.5 ಲಕ್ಷ ಲೀಟರ್ ಸಾಮರ್ಥ್ಯದ ಶುದ್ಧ ಜಲ ಸಂಗ್ರಹಗಾರದ ಜೊತೆ ಪಂಪ್ ಹೌಸ್ ನಿರ್ಮಾಣ ಹಾಗೂ ನಾಗಯ್ಯಕೊಪ್ಪಲು ಒಳ ಚರಂಡಿ ಕಾಮಗಾರಿಗಳು ಭರದಿಂದ ಸಾಗಿದೆ.
ಈ ಕಾಮಗಾರಿ ಪೈಕಿ ಬೆಂಗಳೂರು ರಸ್ತೆಯ ಶ್ರೀಕಂಠನಗರ, ಅರಳಿಮರದ ರಸ್ತೆಯ ಮುಂಭಾಗ, ಶ್ರೀಮಠದ ಹಿಂಭಾಗ ಮತ್ತು ಮುಂಭಾಗದ ಒಳಚರಂಡಿಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದೆ.
ಪ್ರಸ್ತುತ ಪಂಪ್ಹೌಸ್ ಇರುವ ಸ್ಥಳದಿಂದ 500 ಮೀಟರ್ ಉದ್ದದವರೆಗಿನ ಮುಖ್ಯ ಪೈಪ್ಗಳನ್ನು ಬದಲಾಯಿಸಿ 200 ಎಂ.ಎಂ. ಅಳತೆಯ ಪೈಪ್ಗಳ ಜೋಡಣಾ ಕಾಮಗಾರಿ ನಡೆಯುತ್ತಿದೆ ಎಂದು ಬೆಂಗಳೂರಿನ ಶುಭಾ ಸೇಲ್ಸ್ ಗುತ್ತಿಗೆದಾರ ಕಂಪೆನಿಯ ಬಾಲಾಜಿ ಶ್ರೀನಿವಾಸ್ ತಿಳಿಸಿದರು.