ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮುಕ್ಕಣ್ಣ ಮುಕ್ಕಣ್ಣವರ ನೇತೃತ್ವದಲ್ಲಿ ಮಂಗಳವಾರ ಕೂಡಲಸಂಗಮದಿಂದ ಆರಂಭಗೊಂಡ ಪಾದಯಾತ್ರೆ ಖಜಗಲ್ಲ, ಕೆಂಗಲ್ಲ, ವರಗೋಡದಿನ್ನಿ, ಹೂವನೂರ, ಸಂಗಮ ಕ್ರಾಸ್, ಬೆಳಗಲ್ಲ, ಬಿಸನಾಳಕೊಪ್ಪ, ಇದ್ದಲಗಿ, ಕಮದತ್ತ ಮಾರ್ಗವಾಗಿ ಅಡವಿಹಾಳ ತಲುಪಿ, ಅಲ್ಲಿ ವಾಸ್ತವ್ಯ ಮಾಡಲಾಯಿತು. ಬುಧವಾರ ಬೆಳಿಗ್ಗೆ ಅಡವಿಹಾಳದಿಂದ ಎಮ್ಮಟ್ಟಿ, ಧನ್ನೂರ ಗ್ರಾಮದ ಮಾರ್ಗವಾಗಿ ಮಧ್ಯಾಹ್ನ ಹುಲ್ಲಳ್ಳಿ ತಲುಪಿತು. ನಂತರ ಶಾಸಕ ವಿಜಯಾನಂದ ಕಾಶಪ್ಪನವರ ಪತಿಕೃತಿ ದಹನ ಮಾಡಿದರು.