ಮಣಿಪಾಲ ಭೂ ವಿಜ್ಞಾನ ಇಲಾಖೆಯ ಡಾ.ಎಚ್.ಎಸ್ ಮಹಾದೇಶ್ವರ ಮತ್ತು ಬ್ರಹ್ಮಾವರ ಪೋಲಿಸರಿಗೆ ಸಿಕ್ಕಿದ ಮಾಹಿತಿಯಂತೆ ಹಾವಂಜೆ ಗ್ರಾಮದ ಕೊಳಲಗಿರಿ ಪರಿಸರದ ಸ್ವರ್ಣ ನದಿಯ ಆಸುಪಾಸಿನಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಕೊಳಲಗಿರಿಯ ಅನ್ಸಾರ್ ಅಹಮ್ಮದ್ ಅವರ ಜಾಗದಲ್ಲಿ 645 ಮೆಟ್ರಿಕ್ ಟನ್ ₹3,59,910 ಮೌಲ್ಯದ ದಾಸ್ತಾನು ಮಾಡಿದ್ದ ಸಾಧಾರಣ ಮರಳು, ಆನಂದ ಮರಕಾಲ ಅವರ ಜಾಗದಲ್ಲಿ ಇಟ್ಟಿದ್ದ 90 ಮೆಟ್ರಿಕ್ ಟನ್ (₹50,220), ಉಪ್ಪೂರು ಗ್ರಾಮದ ಮಹಿಮೂನ್ ಹಾಗೂ ಅನ್ಸಾರ್ ಅಹಮ್ಮದ್ ಅವರ ಸ್ಥಳದಲ್ಲಿ 292 ಮೆಟ್ರಿಕ್ ಟನ್ (₹1,62,936) ಮರಳು ವಶಪಡಿಸಿಕೊಂಡರು.