‘ಹಲವಾರು ತಿಂಗಳಿಂದ ಕೂಡಾ ನ್ಯಾಯಬೆಲೆ ಅಂಗಡಿಯ ಮಾಲೀಕ ತೂಕ ಕಡಿಮೆ ಮಾಡಿ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. ಗ್ರಾಹಕರು ಕೇಳಲು ಹೋದರೆ ದಬಾಯಿಸಿ ಕಳುಹಿಸುತ್ತಾರೆ. ಗ್ರಾಹಕರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮರ್ಪಕವಾಗಿ ಪಡಿತರ ಪದಾರ್ಥಗಳನ್ನು ವಿತರಣೆ ಮಾಡುವಂತೆ ಮಾಡಬೇಕು’ ಎಂದು ಗ್ರಾಮಸ್ಥರಾದ ಮಲ್ಲಯ್ಯ, ವಿಜಯಕುಮಾರ್, ರಮೇಶ್ ಆಗ್ರಹಿಸಿದರು.