‘ಬೆಳಿಗ್ಗೆ 5.30ರ ಸುಮಾರಿಗೆ ಕಾರ್ತಿಕ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ವಾಂತಿ ಮಾಡಿಕೊಂಡ ಇವರು ಮೂರ್ಚೆ ಹೋದರು. ನಂತರ ನೀರು ಕುಡಿಸಿ ಮನೆಯವರು ಮಲಗಿಸಿದರು. ಆದರೆ, ಕೆಲ ಹೊತ್ತಿನ ನಂತರ ಎಬ್ಬಿಸಲು ಹೋದಾಗ ಆತ ಪ್ರತಿಕ್ರಿಯಿಸದಿದ್ದರಿಂದ ಗಾಬರಿಗೊಂಡ ಮನೆಯವರು ನೇರವಾಗಿ ಸಮೀಪದ ರಾಮನಗೌಡ ಆಸ್ಪತ್ರೆಗೆ ಕರೆದುಕೊಂಡು ಹೋದರು.