ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದ ಮೈಲಿಗೆಯೇ?

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನೋಡಿ ಈ ಪತ್ರ ಬರೆಯುತ್ತಿದ್ದೇನೆ. ಇಲ್ಲಿ ಹತ್ತಾರು ಗೋಷ್ಠಿಗಳಿವೆ, ನೂರಾರು ಜನ ಪ್ರಬಂಧ, ಕವಿತೆಗಳನ್ನು ಮಂಡಿಸಲಿದ್ದಾರೆ. ಆದರೆ ಸಾಹಿತ್ಯ ಸಮ್ಮೇಳನದ ಆಯೋಜಕರಿಗೆ ಆಧುನಿಕ ಜಗತ್ತಿನಲ್ಲಿ ಅನುವಾದದ ಮಹತ್ವ ಏನೆಂಬುದು ಅರಿವಿಗೆ ಬಾರದಿರುವುದು ವಿಷಾದದ ಸಂಗತಿಯಾಗಿದೆ.

ವೈವಿಧ್ಯಮಯ ಸಂಸ್ಕೃತಿಯ ನಮ್ಮ ದೇಶದಲ್ಲಿ, ಧರ್ಮ, ದರ್ಶನ, ಸಾಹಿತ್ಯ, ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ, ವಾಣಿಜ್ಯ, ವ್ಯವಹಾರ, ರಾಜಕೀಯ ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅನುವಾದವೆಂಬ ವಾಹಕವಿಲ್ಲದೇ ಹೋಗಿದ್ದಿದ್ದರೆ ಎಲ್ಲವೂ ನಿಂತ ನೀರಾಗುತ್ತಿತ್ತು. ಎಲ್ಲ ಕ್ಷೇತ್ರಗಳೂ ಕೂಪಗಳಾಗುತ್ತಿದ್ದವು, ದ್ವೀಪಗಳಾಗುತ್ತಿದ್ದವು. ಅನುವಾದಗಳಿಂದ ಇಂದು ವಿಶ್ವ ಕಿರಿದಾಗಿದೆ. ಅಪರಿಚಿತರು ಪರಿಚಿತರಾಗಿದ್ದಾರೆ.

ಕನ್ನಡದ ಸಂದರ್ಭದಲ್ಲಿ ಹೇಳಬೇಕೆಂದರೆ, ದೇಶದ ಹತ್ತು ಹಲವು ಭಾಷೆಗಳಿಂದ ನಿರಂತರವಾದ ಅನುವಾದಗಳು ಕನ್ನಡಕ್ಕೆ ಆಗುತ್ತಿವೆ. ಹಾಗೆಯೇ ಕನ್ನಡದಿಂದ ಆ ಭಾಷೆಗಳಿಗೆ ಆಗುತ್ತಿವೆ. ಹಾಗೆ ನೋಡಿದರೆ ಅನುವಾದ ಸಾಹಿತ್ಯವನ್ನು ಕುರಿತಾದ ಚರ್ಚೆಗೆಂದೇ ಪ್ರತ್ಯೇಕ ಗೋಷ್ಠಿಯನ್ನು ಇಡಬೇಕಿತ್ತು. ಇದು ಆಗದಿದ್ದಾಗ, ಎಲ್ಲಾದರೂ ಒಂದು ಕಡೆ ಅನುವಾದ ಸಾಹಿತ್ಯವನ್ನು ಕುರಿತು ಒಂದೆರಡು ಪ್ರಬಂಧಗಳನ್ನು ಮಂಡಿಸಲು ಅವಕಾಶ ವಿರಬೇಕಿತ್ತು. ನಮ್ಮಲ್ಲಿ ಅನುವಾದವನ್ನು ಕುರಿತು ಮಾತನಾಡುವ ವಿದ್ವಾಂಸರಿದ್ದಾರೆ.

ಅವರನ್ನು ಗುರುತಿಸಿ ಆಹ್ವಾನಿಸಬೇಕಾಗಿತ್ತು. ಹೀಗೆ ಮಾಡದಿರುವುದು ಒಂದು ದೊಡ್ಡ ಲೋಪ. ಸಾಹಿತ್ಯ ಸಮ್ಮೇಳನಕ್ಕೆ ಅನುವಾದವೆಂದರೆ ಮೈಲಿಗೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT