ವೈವಿಧ್ಯಮಯ ಸಂಸ್ಕೃತಿಯ ನಮ್ಮ ದೇಶದಲ್ಲಿ, ಧರ್ಮ, ದರ್ಶನ, ಸಾಹಿತ್ಯ, ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ, ವಾಣಿಜ್ಯ, ವ್ಯವಹಾರ, ರಾಜಕೀಯ ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅನುವಾದವೆಂಬ ವಾಹಕವಿಲ್ಲದೇ ಹೋಗಿದ್ದಿದ್ದರೆ ಎಲ್ಲವೂ ನಿಂತ ನೀರಾಗುತ್ತಿತ್ತು. ಎಲ್ಲ ಕ್ಷೇತ್ರಗಳೂ ಕೂಪಗಳಾಗುತ್ತಿದ್ದವು, ದ್ವೀಪಗಳಾಗುತ್ತಿದ್ದವು. ಅನುವಾದಗಳಿಂದ ಇಂದು ವಿಶ್ವ ಕಿರಿದಾಗಿದೆ. ಅಪರಿಚಿತರು ಪರಿಚಿತರಾಗಿದ್ದಾರೆ.