ಮೈಸೂರು: 2 ಸಾವಿರ ಮಕ್ಕಳು ‘83ನೇ ಕನ್ನಡ ಸಾಹಿತ್ಯ ಸಮ್ಮೇಳನ’ ಹಾಗೂ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಸಾಲುಗಳನ್ನು ರಚಿಸಲಿದ್ದಾರೆ. ಮೇಲಿನಿಂದ ವೀಕ್ಷಿಸಿದಾಗ (ಏರಿಯಲ್ ವ್ಯೂ) ಈ ಸಾಲುಗಳು ಗೋಚರಿಸುತ್ತವೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ‘ಡ್ರೋಣ್’ ಮೂಲಕ ಚಿತ್ರೀಕರಿಸಿರುವ ವಿಡಿಯೊ ಇಲ್ಲಿದೆ.
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನ. 20ರಂದು ಬೆಳಿಗ್ಗೆ 8ಕ್ಕೆ ಮೈಸೂರು ಅರಮನೆ ಆವರಣದಲ್ಲಿ ಶಾಲಾ ಮಕ್ಕಳಿಂದ ಮಾನವ ರಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.