ಕೆಜಿಎಫ್: ‘ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ್ದ ಯೋಜನೆಗಳಿಗೆ ಹೆಸರು ಬದಲಾಯಿಸಿ ಜಾರಿ ಮಾಡುತ್ತಿರುವ ಮೋದಿ ಸರ್ಕಾರ ಜನರಿಗೆ ವಂಚನೆ ಮಾಡುತ್ತಿದೆ’ ಎಂದು ನಗರಸಭೆ ಅಧ್ಯಕ್ಷ ರಮೇಶ್ ಕುಮಾರ್ ಆರೋಪಿಸಿದರು. ರಾಬರ್ಟಸನ್ಪೇಟೆಯಲ್ಲಿ ಇಂದಿರಾಗಾಂಧಿ ಅವರ 100ನೇ ಜನ್ಮದಿನಾಚರಣೆ ಅಂಗವಾಗಿ ಅವರ ಪುತ್ಥಳಿಗೆ ಭಾನುವಾರ ಗೌರವ ಸಲ್ಲಿಸಿ ಮಾತನಾಡಿದರು.
’ದೇಶದಲ್ಲಿ ಹತ್ತರಿಂದ ಹದಿನೈದು ಲಕ್ಷ ಕೋಟಿ ರೂಪಾಯಿ ಬಜೆಟ್ ತಯಾರಾಗುತ್ತಿದೆ. ಇಷ್ಟು ದೊಡ್ಡ ಬಜೆಟ್ ತಯಾರಿ ಮಾಡಲು ದೇಶದ ಆರ್ಥಿಕತೆಗೆ ಕೊಡುಗೆ ನೀಡಿದ ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರನ್ನು ಟೀಕಿಸಿದರು.
ಕೆಜಿಎಫ್ ಹೊಸ ತಾಲ್ಲೂಕು ಆದ ಸಂದರ್ಭದಲ್ಲಿ ನಗರದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವುದಾಗಿ ಅವರು ಪ್ರಕಟಿಸಿದರು. ಕೆಪಿಸಿಸಿ ಸದಸ್ಯ ಕಾರ್ತಿಕ್, ಮುಖಂಡರಾದ ರಶೀದ್ ಖಾನ್, ನಾಗರಾಜ್,ಆನಂದಕೃಷ್ಣನ್. ಜರ್ಮನ್, ಸೀನಿ, ರಂಗ ಇದ್ದರು.