‘ಕುವೆಂಪು ಮೈಸೂರಿಗಷ್ಟೇ ಸೀಮಿತರಾಗಿದ್ದರು. ಅವರೆಂದೂ ಸಮಗ್ರ ಕರ್ನಾಟಕವನ್ನು ಸುತ್ತಿ ನೋಡಲಿಲ್ಲ’ ಎಂದು ಪಾಟೀಲ ಪುಟ್ಟಪ್ಪನವರು ಕುವೆಂಪು ಅವರನ್ನು ಟೀಕಿಸಿದ್ದಾರೆ (ಪ್ರ.ವಾ., ನ. 20). ಇದು ಪಾಪು ಅವರ ತಪ್ಪು ಗ್ರಹಿಕೆಯ ಪ್ರತಿಕ್ರಿಯೆಯಾಗಿದೆ. ಕುವೆಂಪು ವೃತ್ತಿಯಿಂದ ಅಧ್ಯಾಪಕ, ಪ್ರವೃತ್ತಿಯಿಂದ ಲೇಖಕ. ವೃತ್ತಿಯ ಒತ್ತಡದ ನಡುವೆಯೂ ಅವರು ನಾಡು–ನುಡಿಗಾಗಿ ಅವಿರತ ದುಡಿದವರಾಗಿದ್ದಾರೆ.