‘ಅರಮನೆಗಳಿಗೆ ಇಲಿ, ಹೆಗ್ಗಣಗಳು ಸೇರಿಕೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್ ಕೂಡ 1977–78ರಲ್ಲಿ ಅಂತಹ ಕಳಂಕಕ್ಕೆ ಗುರಿಯಾಗಿತ್ತು. ಇದರಿಂದಾಗಿ ಪರಿಷತ್ ಆಡಳಿತ ಚುಕ್ಕಾಣಿ ಸರ್ಕಾರದ ಕೈಗೆ ಹೋಗಿತ್ತು. ಸರ್ಕಾರ ಆಡಳಿತ ಅಧಿಕಾರಿ ನೇಮಿಸಿತ್ತು. ಪುನಾ ಚುನಾಯಿತ ಅಧ್ಯಕ್ಷರನ್ನು ನೇಮಿಸಲಿದೆ ಎಂದಾಗ ಪರಿಷತ್ ಹಿತ ಬಯಸುವವರ ಒತ್ತಾಸೆಗೆ ಕಟ್ಟುಬಿದ್ದು, ಚುನಾವಣೆಗೆ ಸ್ಪರ್ಧಿಸಿ ಆಯ್ಕೆ ಆಗಿದ್ದೆ. ಪರಿಷತ್ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಸಾಮಾನ್ಯ ಸಂಗತಿ ಅಲ್ಲ, ಸಾಕ್ಷಾತ್ ಸರಸ್ವತಿಯ ಪೀಠದ ಅಧ್ಯಕ್ಷರಾದಂತೆ. ಈ ಎಚ್ಚರಿಕೆಯಿಂದಲೇ ನನ್ನ ಅವಧಿಯಲ್ಲಿ ಪರಿಷತ್ ಮುನ್ನಡೆಸಿದ್ದೆ’ ಎಂದು ನೆನಪುಗಳನ್ನು ಮೆಲು ಹಾಕಿದರು.