‘ಪದ್ಮಾವತಿ ಚಿತ್ರ ದೊಡ್ಡ ವಿವಾದವಾಗಿ ಮಾರ್ಪಟ್ಟಿರುವಾಗ ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್, ಬಹುಮುಖ ತಾರೆ ಅಮೀರ್ ಖಾನ್ ಮತ್ತು ಅತ್ಯಂತ ಜನಪ್ರಿಯ ನಟ ಶಾರುಕ್ ಖಾನ್ ಯಾಕೆ ಏನೂ ಮಾತನಾಡುತ್ತಿಲ್ಲ ಎಂದು ಜನರು ಕೇಳುತ್ತಿದ್ದಾರೆ’ ಎಂದು ಪಟ್ನಾ ಸಾಹೀಬ್ ಕ್ಷೇತ್ರದ ಸಂಸದರೂ ಆಗಿರುವ ಸಿನ್ಹಾ ಹೇಳಿದ್ದಾರೆ. ಶತ್ರುಘ್ನ ಅವರು ನೋಟು ರದ್ದತಿ ಸೇರಿದಂತೆ ಸರ್ಕಾರದ ಕೆಲವು ನಿರ್ಧಾರಗಳ ವಿರುದ್ಧವಾಗಿ ನಿಲುವು ತಳೆದಿದ್ದಾರೆ.