ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮೂರು ವರ್ಷಕ್ಕೊಮ್ಮೆ ನಡೆಯಲಿಎಂದು ಸಲಹೆ ನೀಡಿದ್ದಾರೆ ಮುಖ್ಯಮಂತ್ರಿ ಚಂದ್ರು (ಪ್ರ.ವಾ., ನ.19). ಇದು ಸರಿಯಲ್ಲ. ಏಕೆಂದರೆ ಕನ್ನಡದ ಪುಸ್ತಕಗಳಿಗೆ ಮಾರುಕಟ್ಟೆಯೇ ಇಲ್ಲದೆ, ಪ್ರಕಟವಾದ ಪುಸ್ತಕಗಳನ್ನು ಖರ್ಚು ಮಾಡುವುದೇ ಸಮಸ್ಯೆಯಾಗಿ, ಲೇಖಕರು ಪುಸ್ತಕ ಪ್ರಕಟಿಸುವುದನ್ನೇ ನಿಲ್ಲಿಸುವ ಪರಿಸ್ಥಿತಿ ಉಂಟಾಗಿದೆ.