ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ಅಗತ್ಯ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮೂರು ವರ್ಷಕ್ಕೊಮ್ಮೆ ನಡೆಯಲಿಎಂದು ಸಲಹೆ ನೀಡಿದ್ದಾರೆ ಮುಖ್ಯಮಂತ್ರಿ ಚಂದ್ರು (ಪ್ರ.ವಾ., ನ.19). ಇದು ಸರಿಯಲ್ಲ. ಏಕೆಂದರೆ ಕನ್ನಡದ ಪುಸ್ತಕಗಳಿಗೆ ಮಾರುಕಟ್ಟೆಯೇ ಇಲ್ಲದೆ, ಪ್ರಕಟವಾದ ಪುಸ್ತಕಗಳನ್ನು ಖರ್ಚು ಮಾಡುವುದೇ ಸಮಸ್ಯೆಯಾಗಿ, ಲೇಖಕರು ಪುಸ್ತಕ ಪ್ರಕಟಿಸುವುದನ್ನೇ ನಿಲ್ಲಿಸುವ ಪರಿಸ್ಥಿತಿ ಉಂಟಾಗಿದೆ.

ಇನ್ನು ಅನೇಕ ಸಂದರ್ಭದಲ್ಲಿ ಒಳ್ಳೆಯ ಪುಸ್ತಕಗಳು ಲೇಖಕರಿಗೆ ಒಂದೇ ಕಡೆ ಲಭಿಸುವುದಿಲ್ಲ. ಕನ್ನಡ ಓದುಗರು ಅಂಥ ಪುಸ್ತಕಗಳಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಈ ಸಮಸ್ಯೆಗಳ ನಿವಾರಣೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪುಸ್ತಕ ಮಾರಾಟ ಮತ್ತು ಪ್ರದರ್ಶನದ ವ್ಯವಸ್ಥೆ ಒಳ್ಳೆಯ ಅವಕಾಶವಾಗಿದೆ. ಆದ್ದರಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳು ಕೂಡ ಪ್ರತಿ ವರ್ಷ ನಡೆಯಬೇಕು. ಆಗ ಮಾತ್ರ ಲೇಖಕ, ಪ್ರಕಾಶಕ ಮತ್ತು ಓದುಗರ ನಡುವೆ ಒಂದು ಸಂಬಂಧ ಏರ್ಪಡುತ್ತದೆ. ಓದುವ ಆಸಕ್ತಿಯೂ ಚಿಗುರಿ ಭಾಷೆ– ಸಂಸ್ಕೃತಿ ಜೀವ ತಳೆಯುತ್ತವೆ.

–ಹುರುಕಡ್ಲಿ ಶಿವಕುಮಾರ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT