‘ಬಹುಸಂಖ್ಯಾತರು ಸದಾ ಕಾಲ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಅಸ್ಮಿತೆಯ ಬಗ್ಗೆ ಚಿಂತಿಸುತ್ತಾ ಇರುತ್ತಾರೆ. ಅಲ್ಪಸಂಖ್ಯಾತರು ಸದಾ ಕಾಲವೂ ಅಧಿಕಾರಕ್ಕೆ ಬರುವುದಕ್ಕಾಗಿ ಅಸ್ಮಿತೆಯ ಚಿಂತೆಯಲ್ಲಿ ಇರುತ್ತಾರೆ. ಇದರಿಂದಾಗಿ ಯಾವಾಗಲೂ ತಮ್ಮ ಧರ್ಮ, ಮತ, ಪಂಥಗಳಿಗೆ ಕಿಂಚಿತ್ತೂ ತೊಂದರೆಯಾದರೆ ಇಡೀ ಸಮುದಾಯಕ್ಕೆ ಆದಂತಹ ಅವಮಾನ ಎಂದು ಬಿಂಬಿಸಲಾಗುತ್ತದೆ. ಇದುವೇ ಭಾರತ ಈಗ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ' ಎಂದು ರಾಮಚಂದ್ರನ್ ಹೇಳಿದರು.