‘ಬಹುತ್ವವೆನ್ನುವುದು ಸಾವಯವದ ಇನ್ನೊಂದು ಅರ್ಥ. ಪ್ರಾಚೀನರಲ್ಲೂ, ಆಧುನಿಕರಲ್ಲೂ ಇದು ಜೀವನ ಮೌಲ್ಯದ ಪ್ರಶ್ನೆಯಾಗಿಯೇ ಉಳಿದಿದೆ. ಅಲ್ಲಲ್ಲಿ ಸಂಘರ್ಷದ ಅಪರೂಪದ ಉದಾಹರಣೆಗಳು ಸಿಕ್ಕರೂ ಕನ್ನಡ ಮನಸ್ಸು ಆದಿಯಿಂದ ಬಹುತ್ವವನ್ನು ಪ್ರಕಟಿಸುತ್ತಾ, ಆರಾಧಿಸುತ್ತಾ, ಆಚರಿಸುತ್ತಾ, ಅದರಲ್ಲಿ ಸ್ವಸ್ಥಗೊಳ್ಳುತ್ತಾ, ಅದರ ವಿವೇಕವನ್ನು ಸಮಾಜಕ್ಕೆ ಹಂಚುತ್ತಾ ಬಂದಿದೆ. ಬಹುತ್ವವನ್ನು ನಿರಾಕರಿಸುವವರು ಬದುಕನ್ನೇ ನಿರಾಕರಿಸಿದಂತೆ’ ಎಂದರು.