ರಾಜ್ಹಾರಾದಲ್ಲಿ ಖಾಸಗಿ ಸಂಸ್ಥೆ ವಿನಿ ಐರನ್ ಹಾಗೂ ಸ್ಟೀಲ್ ಉದ್ಯೋಗ್ ಲಿ.ಗೆ ಅನಧಿಕೃತವಾಗಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳ ಪೈಕಿ ನಾಲ್ವರು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ಜಾರ್ಖಂಡ್ ಮಾಜಿ ಸಿಎಂ ಮಧು ಕೋಡಾ, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹರೀಶ್ ಚಂದ್ರ ಗುಪ್ತಾ, ಆಗಿನ ಮುಖ್ಯ ಕಾರ್ಯದರ್ಶಿ ಎ.ಕೆ.ಬಸು, ಇತರರು ದೋಷಿಗಳಾಗಿದ್ದಾರೆ.