‘17ನೇ ಶತಮಾನದಲ್ಲಿದ್ದ ಶಿವಪ್ಪ ನಾಯ್ಕ ಕುರಿತ ಶಾಸನವಾಗಿರುವ ಸಾಧ್ಯತೆ ಇದ್ದು, ಅಚ್ಚಕನ್ನಡದಲ್ಲಿ ಕೆಳದಿ ನಾಯ್ಕರು ಎಂದು ಬರದಿರುವುದು ವಿಶೇಷವಾಗಿದೆ. 1667ರಲ್ಲಿ ಹದಿನಾಡಿನ ಮುದ್ದುರಾಜ ದತ್ತಿ ಬಿಟ್ಟಿರುವ ಕುರಿತು ತಾಮ್ರ ಶಾಸನ ಹಾಗೂ ದಿವಾನ್ ಪೂರ್ಣಯ್ಯ ಅವರು ಎರಡು ಗ್ರಾಮಗಳನ್ನು ದತ್ತಿ ಬಿಟ್ಟಿದ್ದರ ಬಗ್ಗೆ ಮಾತ್ರ ಈವರೆಗೂ ಇಲ್ಲಿ ಶಾಸನಗಳು ಲಭ್ಯವಾಗಿದ್ದವು’ ಎಂದು ಇತಿಹಾಸ ಪ್ರಾಧ್ಯಾಪಕ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.