‘ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ’ಗೆ ರೈತಪರ ಹೋರಾಟಗಾರ್ತಿ ಕೆ.ಎಚ್.ನಂದಿನಿ ಜಯರಾಮ್ (₹20,000 ನಗದು, ಪ್ರಶಸ್ತಿ ಫಲಕ) ಹಾಗೂ
ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ನೀಡುವ ‘ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ’ಗೆ ಎನ್.ಜಗದೀಶ್ ಕೊಪ್ಪ (₹15,000 ನಗದು, ಪ್ರಶಸ್ತಿ ಫಲಕ) ಆಯ್ಕೆಯಾಗಿದ್ದಾರೆ. ಡಿ.31ರಂದು ನಡೆಯಲಿರುವ ಕುವೆಂಪು ಜನ್ಮೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.