ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಿಣಿಗೆ ವಿಶ್ವಮಾನವ ಪ್ರಶಸ್ತಿ

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ದೇಜಗೌ ಟ್ರಸ್ಟ್ ನೀಡುವ ‘ವಿಶ್ವಮಾನವ ಪ್ರಶಸ್ತಿ’ಗೆ ಲೇಖಕಿ ತಾರಿಣಿ ಚಿದಾನಂದಗೌಡ ಭಾಜನರಾಗಿದ್ದಾರೆ. ಪ್ರಶಸ್ತಿಯು 25,000 ನಗದು, ಫಲಕ ಒಳಗೊಂಡಿರುತ್ತದೆ.

‘ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ’ಗೆ ರೈತಪರ ಹೋರಾಟಗಾರ್ತಿ ಕೆ.ಎಚ್.ನಂದಿನಿ ಜಯರಾಮ್ (₹20,000 ನಗದು, ಪ್ರಶಸ್ತಿ ಫಲಕ) ಹಾಗೂ
ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ನೀಡುವ ‘ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ’ಗೆ ಎನ್.ಜಗದೀಶ್ ಕೊಪ್ಪ (₹15,000 ನಗದು, ಪ್ರಶಸ್ತಿ ಫಲಕ) ಆಯ್ಕೆಯಾಗಿದ್ದಾರೆ. ಡಿ.31ರಂದು ನಡೆಯಲಿರುವ ಕುವೆಂಪು ಜನ್ಮೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT