ಬಡ್ತಿಯಲ್ಲಿ ಮೀಸಲಾತಿ ನೀಡುವ ಕುರಿತು ಒಂದೂವರೆ ದಶಕಗಳ ಹಿಂದೆ ತಂದಿರುವ ಕಾಯ್ದೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಅನೇಕರು ಈಗ ಬಡ್ತಿ ಪಡೆದು ವಿವಿಧ ಹುದ್ದೆಯಲ್ಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಅನುಸಾರ ಅವರಿಗೆಲ್ಲ ಹಿಂಬಡ್ತಿ ನೀಡಿದರೆ ನೌಕರರ ಮೇಲೆ ಮಾನಸಿಕ, ಸಾಮಾಜಿಕವಾಗಿ ದುಷ್ಪರಿಣಾಮ ಉಂಟಾಗಲಿದೆ. ಇದನ್ನು ತಪ್ಪಿಸಲು ಸರ್ಕಾರ ತಂದಿರುವ ಮಸೂದೆಗೆ ಉಭಯ ಸದನಗಳು ಅನುಮೋದನೆ ನೀಡಿವೆ ಎಂದು ರಾಷ್ಟ್ರಪತಿಗಳಿಗೆ ವಿವರಿಸಿದ ಸಿದ್ದರಾಮಯ್ಯ, ಮಾನವೀಯತೆ ಆಧಾರದ ಮೇಲೆ ಅಂಕಿತ ಹಾಕುವಂತೆ ಕೋರಿದರು ಎಂದು ಮೂಲಗಳು ತಿಳಿಸಿವೆ.