ವಿಜಯೋತ್ಸವ: ಅತ್ತಾರ ಆಯ್ಕೆ ಯಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಿ ಸಿಹಿ ವಿತರಿಸಿದರು. ಪಟ್ಟಣ ವಿವಿಧ ಗಣ್ಯರು ಅತ್ತಾರ ಅವರನ್ನು ಸನ್ಮಾನಿಸಿದರು. ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು, ಗಣ್ಯರು ಪಾಲ್ಗೊಂಡಿದ್ದರು.