ನಗರದ ಮಹಾತ್ಮ ಗಾಂಧಿ ವೃತ್ತದಿಂದ ಪ್ರವಾಸಿ ಮಂದಿರ ವೃತ್ತದವರೆಗೆ ಎರಡು ಹೆದ್ದಾರಿಗಳು ಹಾದು ಹೋಗಿರುವ ರಸ್ತೆ ತುಂಬಾ ಹದಗೆಟ್ಟಿದೆ. ವೇದಾವತಿ ನದಿಗೆ ನಿರ್ಮಿಸಿರುವ ಸೇತುವೆಯ ಎರಡೂ ಬದಿಯ ಪಾದಚಾರಿ ಜಾಗದ ಸ್ಲ್ಯಾಬ್ಗಳು ಮುರಿದುಹೋಗಿ, ಗುಂಡಿಗಳು ಬಿದ್ದಿವೆ. ರಾತ್ರಿ ನಡೆದು ಹೋಗುವವರು ಮೈಯೆಲ್ಲ ಕಣ್ಣಾಗಿ ಓಡಾಡಬೇಕಿದೆ. ಇದಕ್ಕೆ ಮುಕ್ತಿ ಸಿಗುವುದು ಯಾವಾಗ ಎಂದು ಗಿರಿಧರ್ ಪ್ರಶ್ನಿಸುತ್ತಾರೆ.