ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಅಂಚೆ ಕಚೇರಿಯ ಆಧಾರ್ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಹೊಸ ನೋಂದಣಿ ಉಚಿತವಾಗಿ ಮಾಡಿದರೆ, ತಿದ್ದುಪಡಿಗೆ ₨30 ಶುಲ್ಕ ತೆರಬೇಕಿದೆ. ಅಂಚೆ ಸಿಬ್ಬಂದಿಗೆ ತರಬೇತಿ ನೀಡಿ ಅವರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ‘ಪ್ರಜಾವಾಣಿ’ ಬುಧವಾರ ಬಾಗಲಕೋಟೆಯ ಕೇಂದ್ರ ಅಂಚೆ ಕಚೇರಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಅಲ್ಲಿ ಆಧಾರ್ ನೋಂದಣಿಗೆ ಪಾಳಿಯಲ್ಲಿ ನಿಂತದ್ದು ಕಂಡುಬಂದಿತು.15 ನಿಮಿಷಕ್ಕೆ ಒಬ್ಬರಂತೆ ದಿನಕ್ಕೆ 30ರಿಂದ 40 ಮಂದಿಗೆ ಆಧಾರ್ ನೋಂದಣಿ ಮಾಡಿಕೊಡಲಾಗುವುದು ಎಂದು ಸಿಬ್ಬಂದಿ ತಿಳಿಸಿದರು.