‘ಶಿಕ್ಷಣ, ನೀರು, ವಿದ್ಯುತ್ ಎಲ್ಲವೂ ದೆಹಲಿ ಸರ್ಕಾರದ ಜವಾಬ್ದಾರಿ. ಈ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಿಸುವ ಅಧಿಕಾರವೇ ಇಲ್ಲದಿದ್ದರೆ, ಜವಾಬ್ದಾರಿ ನಿರ್ವಹಿಸುವುದಾದರೂ ಹೇಗೆ? ಗೃಹ ಸಚಿವಾಲಯದ ಸೂಚನೆ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಹೀಗೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಹತ್ತಿಕ್ಕುವ ಸಂಚಿನ ಭಾಗವಾಗಿಯೇ ಹೀಗೆ ಮಾಡಲಾಗುತ್ತಿದೆ’ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.