ಸುಂದರ ಪುಸ್ತಕ ಪ್ರಕಾಶನದ ಮೂಲಕ ಅನೇಕ ವಿದ್ವಾಂಸರು ಹಾಗೂ ನಾಡಿನ ಶ್ರೇಷ್ಠ ಸಾಹಿತಿಗಳ ಪುಸ್ತಕಗಳನ್ನು ಹೊರತಂದಿದ್ದರು. ಅಭಿನಂದನಾ ಗ್ರಂಥ ಪ್ರಕಟಿಸುವುದು, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಕ್ರಿಯಾಶೀಲರಾಗಿದ್ದರು. ಎಂ.ಎಂ.ಕಲಬುರ್ಗಿ, ಚೆನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಗುರುಲಿಂಗ ಕಾಪಸೆ, ಮಾಲತಿ ಪಟ್ಟಣಶೆಟ್ಟಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಸೋಮಶೇಖರ ಇಮ್ರಾಪುರ, ವೀಣಾ ಶಾಂತೇಶ್ವರ ಸೇರಿದಂತೆ ಅನೇಕರ ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ್ದರು.