ರಾಜ್ಯದ ಪ್ರತಿ ಮನೆಗೂ ತೆರಳಲಿರುವ ಕಾರ್ಯಕರ್ತರು ಒಂದು ಹಿಡಿ ಅಕ್ಕಿ, ಗೋಧಿ ಅಥವಾ ರಾಗಿಯನ್ನು ಸಂಗ್ರಹಿಸಲಿದ್ದಾರೆ. ಈ ಅಭಿಯಾನ ಏಪ್ರಿಲ್ 4 ರವರೆಗೆ ನಡೆಯಲಿದೆ. ಅದೇ 8, 9 ಮತ್ತು 10ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮೂಹಿಕ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.