‘ದೈತ್ಯ ಶಕ್ತಿ ಮೊದಲು ಗೆದ್ದಂತೆ ಕಾಣಿಸುತ್ತದೆ. ಆದರೆ, ನಂತರ ಗೆಲ್ಲುವುದು ಸಾತ್ವಿಕ ಶಕ್ತಿಯೇ. ಆದರೆ, ಆ ದೈತ್ಯ ಶಕ್ತಿ ಜತೆಗೆ ನಮ್ಮವರೂ ಕೆಲವರು ಸೇರಿಕೊಂಡಿದ್ದಾರೆ. ಈಗ ಪ್ರತ್ಯೇಕ ಧರ್ಮದ ಪ್ರತಿಪಾದನೆ ಮಾಡುತ್ತಿರುವ ಪ್ರಮುಖ ಸ್ವಾಮೀಜಿ, ಮಠದ ಆಸ್ತಿ ಮಾರಿದಷ್ಟು, ಯಾವ ಸ್ವಾಮೀಜಿಯೂ ಮಾರಾಟ ಮಾಡಿರಲಿಲ್ಲ. ಸ್ವಾಮೀಜಿಗಳೆಂದರೆ ಕಾಯಕ ಮಾಡಿ, ಧರ್ಮದ ಕೆಲಸ ಮಾಡಿ ಜೀವಿಸಬೇಕು. ಆದರೆ, ಇವರು ಮಠದ ಆಸ್ತಿ ಮಾರಿ ಅಯೋಗ್ಯ ಸ್ವಾಮೀಜಿ ಎನಿಸಿದ್ದಾರೆ. ಕೆಟ್ಟ ಸ್ವಾಮೀಜಿಗಳು ಮತ್ತು ಸ್ವಾರ್ಥ ಭಕ್ತರಿಂದ ರಾಜ್ಯದಲ್ಲಿ ಕೆಲವು ಮಠಗಳು ಹಾಳಾಗಿವೆ’ ಎಂದು ಕಿಡಿಕಾರಿದರು.