‘ಪೊಲೀಸರಿಂದ ತಪ್ಪಿಸಿಕೊಂಡ ನಂತರ ಆರೋಪಿ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿದ್ದ ಕೆಲ ವಕೀಲರು ಹಾಗೂ ಪರಿಚಯಸ್ಥರ ಮನೆಗಳಿಗೆ ಅಲೆದಾಡಿದ್ದ. ತನ್ನನ್ನು ಪೊಲೀಸರಿಂದ ಕಾಪಾಡುವಂತೆ ಕೋರಿದ್ದ. ಅದಕ್ಕೆ ಅವರ್ಯಾರು ಸ್ಪಂದಿಸಿರಲಿಲ್ಲ. ಹೀಗಾಗಿ, ಬೆಂಗಳೂರಿಗೆ ಬಂದು ಪರಿಚಯಸ್ಥ ಬಾಲಾಜಿ ಮನೆಯಲ್ಲಿ ಉಳಿದುಕೊಂಡಿದ್ದ’ ಎಂದು ಹಿರಿಯ ಅಧಿಕಾರಿ ಹೇಳಿದರು.