17 ಮಂದಿ ಉಮೇದುವಾರಿಕೆಯಲ್ಲಿ 28 ನಾಮಪತ್ರ ಸಲ್ಲಿಸಲಾಗಿತ್ತು. ಈ ಪೈಕಿ ಕಾಂಗ್ರೆಸ್ ಪಕ್ಷದಿಂದ ಕೆ.ವೈ.ನಂಜೇಗೌಡ, ಬಿಜೆಪಿಯಿಂದ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಜೆಡಿಎಸ್ ವತಿಯಿಂದ ಶಾಸಕ ಕೆ.ಎಸ್.ಮಂಜುನಾಥ್ ಗೌಡ, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯಿಂದ ಕೆ.ಗೋಪಾಲಪ್ಪ, ಅಂಬೇಡ್ಕ(ರೈ) ಪಾರ್ಟಿ ಆಫ್ ಇಂಡಿಯಾ (ಎಪಿಐ) ಪಕ್ಷದಿಂದ ರವಿಕುಮಾರ್, ಸಮಾಜವಾದಿ ಪಕ್ಷದಿಂದ ತಮ್ಮಪ್ಪ, ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಅಮರ್ ನಾಥ್ ಹಾಗೂ ಉಳಿದ ಸ್ವತಂತ್ರ ಅಭ್ಯರ್ಥಿಗಳ ಪೈಕಿ ಮಾಜಿ ಶಾಸಕ ಎ.ನಾಗರಾಜು ನಾಮಪತ್ರ ಸೇರಿದಂತೆ 16 ಮಂದಿ ಉಮೇದುವಾರಿಕೆ ಊರ್ಜಿತವಾಗಿದೆ.