‘ಬಿ.ಎಸ್.ಯಡಿಯೂರಪ್ಪ ಒಬ್ಬರೇ ಜೈಲಿಗೆ ಹೋಗಿಲ್ಲ. ಜನಾರ್ದನ ರೆಡ್ಡಿ, ಹರತಾಳು ಹಾಲಪ್ಪ, ಕೃಷ್ಣಯ್ಯ ಶೆಟ್ಟಿ ಎಲ್ಲರೂ ಜೈಲುಪಾಲಾಗಿ ಜಾಮೀನು ಪಡೆದವರು. ಆದರೆ, ಈ ವಿಷಯವನ್ನು ಹೇಳಿದರೆ ಯಡಿಯೂರಪ್ಪ ಉರಿದು ಬಿಳುತ್ತಾರೆ. ರೆಡ್ಡಿ ಸಹೋದರರು ಅದಿರು ಲೂಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಮಾಡುತ್ತಾ ಇದ್ದರು. 320 ಕಿ.ಮೀ. ಬಳ್ಳಾರಿಗೆ ಪಾದಯಾತ್ರೆ ಮಾಡಿದೆ. ಅದರಿಂದ ರೆಡ್ಡಿ ಸೇರಿ ಹಲವರು ಜೈಲಿಗೆ ಹೋಗುವಂತಾಯಿತು. ಹೀಗಾಗಿ ಮತ್ತೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅಧಿಕಾರಕ್ಕೆ ಬರಬಾರದು, ಅಂತ ಹುನ್ನಾರ ನಡೆಸಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.