ಪಕ್ಕದ ಶಿಕಾರಿಪುರ ತಾಲ್ಲೂಕಿನ ಕೆರೆಗಳು ಮಳೆಯಿಂದ ತುಂಬಿದ ನಂತರ, ಕಾಲ್ವಿಹಳ್ಳಿ ಗ್ರಾಮದ ರಾಮನಕೆರೆ ತುಂಬಲಿದೆ. ಬಳಿಕ ಸುಣ್ಣದ ಕಾಲುವೆ ಮೂಲಕ, ದುರ್ಗಾದೇವಿ ಕೆರೆಗೆ ಮಳೆ ನೀರು ಹರಿದು ಹೋಗಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಾಲುವೆ ನಿರ್ಮಿಸಿದೆ. ಆದರೆ, ಈ ಕಾಲುವೆಯಲ್ಲಿ ಪಟ್ಟಣದ ಶೌಚಾಲಯದ ನೀರು ಸೇರಿದಂತೆ, ತ್ಯಾಜ್ಯ ಹರಿದು ಹೋಗುತ್ತಿದೆ. ಇದರಿಂದ ಕಾಲುವೆ ಅಕ್ಕಪಕ್ಕದ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.