ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್, ಕೆನಡಾ ಸರ್ಕಾರದ ಕೌನ್ಸೆಲ್ ಜನರಲ್ ಗಾರ್ಡನ್ ರೀವ್, ಅಂತರ ರಾಷ್ಟ್ರೀಯ ಸಿನಿಮಾಗಳ ಆಯ್ಕೆ ಸಮಿತಿ ಅಧ್ಯಕ್ಷ ಮುಜಫರ್ ಅಲಿ, ನಟ ಶಾಹಿದ್ ಕಪೂರ್, ನಟಿ ಶ್ರೀದೇವಿ, ಇರಾನ್ ದೇಶದ ಚಿತ್ರ ನಿರ್ದೇಶಕ ಮಜೀದ್ ಮಜಿದಿ, ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಮತ್ತಿತರರು ಮಾತನಾಡಿದರು. ಎಲ್ಲರ ಮಾತುಗಳು ಸಿನಿಮಾ ಹಾಗೂ ಗೋವಾ ಚಿತ್ರೋತ್ಸವ ಕುರಿತ ಪ್ರಶಂಸೆಗೆ ಮೀಸಲಾಗಿತ್ತು.