24ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬುಧವಾರ ಲಡಾಕ್ನಲ್ಲಿ ನಡೆದ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜನಾಥ ಸಿಂಗ್, ‘ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಘನತೆ, ಗೌರವಗಳ ರಕ್ಷಣೆಗೆ ನಾವು ಯಾವ ಹಂತಕ್ಕಾದರೂ ಹೋಗುತ್ತೇವೆ. ನಮ್ಮನ್ನು ಕೆಣಕಿದರೆ ನಾವು ಗಡಿ ನಿಯಂತ್ರಣಾ ರೇಖೆ ದಾಟಿ ಬರಲಿದ್ದೇವೆ’ ಎಂದು ರಾಜನಾಥ ಸಿಂಗ್ ಗುಡುಗಿದ್ದರು.