‘ಪಡಸಾಲೆ’ ಅಂಕಣದಲ್ಲಿ ರಘುನಾಥ ಚ.ಹ. ಮಂಡಿಸಿದ ವಾದವನ್ನು (ಪ್ರ.ವಾ., ಜೂನ್ 24) ಒಪ್ಪಲಾಗಲಿಲ್ಲ! ಏಕೆಂದರೆ ಮಕ್ಕಳ ಸಾಹಿತ್ಯ ಕೃಷಿ ಈಗಲೂ ಹುಲುಸಾಗಿದೆ. ನಾ. ಡಿಸೋಜ ಅವರಿಂದ ಹಿಡಿದು ಅಕ್ಬರ್ ಸಿ. ಕಾಲಿಮಿರ್ಚಿ ಅವರವರೆಗೆ ಅನೇಕ ಸಾಹಿತಿಗಳು ಈಗಲೂ ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಕುವೆಂಪು, ರಾಜರತ್ನಂ ಅಂಥವರ ಸಮೃದ್ಧ ಕೃಷಿಯನ್ನು ಈಗಿನ ಮಕ್ಕಳು ಓದಬಾರದೆಂದೇನಿಲ್ಲವಲ್ಲ!