ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಇಲ್ಲಿಯವರೆಗೆ ಹತ್ತಾರು ಗುಡಿ, ಗುಂಡಾರ, ದೇವಾಯಲಯಗಳನ್ನು ಸುತ್ತಿ, ಸರ್ಕಾರಿ ಖರ್ಚಿನಲ್ಲಿ ಪೂಜೆ, ಪುನಸ್ಕಾರ, ಯಜ್ಞ, ಯಾಗ, ಹವನಗಳನ್ನು ಮಾಡಿದ್ದೇ ಮುಖ್ಯಮಂತ್ರಿಯವರ ಜನಸೇವೆಯ ಮಾದರಿ. ಸರ್ಕಾರದ ನೂರು ದಿನಗಳ ಸಾಧನೆಯಲ್ಲಿ ‘ದೇವರ ಕೆಲಸ’ವೇ ಹೆಚ್ಚಾಗಿ ಕಾಣಿಸುತ್ತಿದೆ!