ಬೆಂಗಳೂರಿನ ಯಶವಂತ 9ನೇ ಕ್ಲಾಸ್ ಫೇಲ್. ಅವನ ಶವ ದಕ್ಷಿಣ ಕನ್ನಡದ ಗುರುವಾಯನಕೆರೆಯ ತಡಿಯಲ್ಲಿ ಪತ್ತೆ. ಭಾರವಾದ ಸ್ಕೂಲ್ಬ್ಯಾಗ್ ಮತ್ತು ಅವನ ಶೂ, ಅವನೊಂದಿಗೆ ಅದೇ ತಡಿಯಲ್ಲಿ ಬಿಟ್ಟುಹೋಗಿದ್ದಾನೆ. ಈ ಬಾಲಕನ ಸಾವಿಗೆ ಕಾರಣ ಬ್ಲೂವೇಲ್ ಆಟ ಎಂದೂ ಶಂಕಿಸಲಾಗಿದೆ. ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ, ಮಾನಸಿಕ ಒತ್ತಡಕ್ಕೆ ಸಿಲುಕಿ ಮನೆ ಬಿಟ್ಟ ಬಾಲಕ ಬದುಕಲಾರದಾದ. ಪೋಷಕರೇ, ಅಧ್ಯಾಪಕರೇ...! ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಬೇಡಿ. ಫೇಲಾದವರು ಮತ್ತೆ ಪಾಸಾಗಬಹುದು. ಬದುಕಿನ ಪಯಣದಲ್ಲೂ ಪಾಸ್ ಆಗಬಹುದು. ಅದಕ್ಕೆ ಅವಕಾಶ ಕೊಡಿ.