ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪಗಳಿಂದ ಜನ ಬಯಸುವುದು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂದೇ ವಿನಾ ಜನಪ್ರತಿನಿಧಿಗಳು ಅವರದೇ ಗೋಳು ಹೇಳಿಕೊಳ್ಳಲಿ ಎಂಬುದನ್ನು ಅಲ್ಲ. ದುರಂತವೆಂದರೆ ಈಗ ನಡೆಯುತ್ತಿರುವ ಕಲಾಪಗಳಲ್ಲಿ ನಾಯಕರ ಗೋಳಾಟವೇ ಕೇಳಿಸುತ್ತಿದೆ. ಅಧಿಕಾರ ಕಳೆದುಕೊಂಡವರ ಕಣ್ಣೀರಧಾರೆ ಹರಿಯುತ್ತಿದೆ. ಅಧಿಕಾರದಲ್ಲಿರುವವರ ಸಮರ್ಥನೆ ಮೊಳಗುತ್ತಿದೆ. ಈ ಮೇಲಾಟದಲ್ಲಿ ಸದನದ ಸಮಯ ಹಾಳಾಗುತ್ತಿದೆ.