ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಪ್ಪೊಪ್ಪಿಗೆಯನ್ನು ಪ್ರೊ. ಶಿವರಾಮಯ್ಯ ಅವರು ದೊಡ್ಡಗುಣ ಅಂತ ಶ್ಲಾಘಿಸಿದ್ದಾರೆ (ವಾ.ವಾ., ಆ. 1). ಎಚ್.ಡಿ.ಕೆ. ಮಾಡಿದ ತಪ್ಪು, ಧರ್ಮಸಿಂಗ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಾಡಿದ ಹುನ್ನಾರ. ಈ ರೀತಿಯ ಕಾಲೆಳೆಯುವ ಗುಣ ಬಹುಪಾಲು ರಾಜಕಾರಣಿಗಳಲ್ಲಿ ರಕ್ತಗತವಾಗಿರುವುದನ್ನು ಸದಾ ನೋಡುತ್ತಿರುತ್ತೇವೆ. ಯಾವುದೇ ರಾಜಕಾರಣಿ ಸತ್ತಾಗ ಅಥವಾ ಅವರ ಪುಣ್ಯಸ್ಮರಣೆಯಲ್ಲಿ ಈ ರೀತಿ ಹೇಳಿಕೆ ಕೊಟ್ಟ ಮಾತ್ರಕ್ಕೆ ಅದು ದೊಡ್ಡ ಗುಣವಾಗುವುದಿಲ್ಲ.