ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ಕಾರಣಿಕದ ನುಡಿಯಾಗಿ ‘ಕಬ್ಬಿಣ ಸರಪಳಿ ಹರೀತಲೇ ಪರಾಕ್’ ಎಂದು ನುಡಿದ ಗೊರವಪ್ಪನ ಮಾತಿನ ಅರ್ಥವನ್ನು ಲೋಕದ ಜನ ಭಿನ್ನಭಿನ್ನವಾಗಿ ಅರ್ಥೈಸುತ್ತಿದ್ದಾರೆ.
ರಾಜಕೀಯ ಆಸಕ್ತರು ಗೊರವಪ್ಪನ ಅರ್ಥಪೂರ್ಣ ವ್ಯಾಖ್ಯೆಯನ್ನು ತಪ್ಪಾಗಿ ಗ್ರಹಿಸಿ ‘ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಸರಪಳಿ ಮುರಿದು ಬೀಳುವ ಸೂಚನೆ’ ಎಂದು ಅರ್ಥೈಸಿರುವರೆಂದು ವರದಿಯಾಗಿದೆ.
ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿಯು ‘ಅಧಿಕಾರವೆಂಬ ಬಂಗಾರದ ಸರಪಳಿಯಿಂದ ಬಂಧಿತ’ವಾಗಿರುವುದರಿಂದ, ಗೊರವಪ್ಪನ ಕಾರಣಿಕದ ‘ಕಬ್ಬಿಣದ ಸರಪಳಿ’ ಪದಗಳು ಮೈತ್ರಿ ಸರ್ಕಾರಕ್ಕೆ ಅನ್ವಯ ಆಗಲಿಕ್ಕಿಲ್ಲವೆಂಬುದು ನನ್ನ ಅನಿಸಿಕೆ!