ನಗರ ಪ್ರದೇಶಗಳಲ್ಲಿ ಕೆರೆ, ಕಾಲುವೆ, ಮೈದಾನಗಳು ಅತಿಕ್ರಮಣಕ್ಕೆ ಒಳಗಾಗಿವೆ. ಅದರ ಪರಿಣಾಮಗಳನ್ನು ಮುಂಬೈ, ಬೆಂಗಳೂರು, ಚೆನೈ ನಗರಗಳಲ್ಲಿ ನೋಡಿದ್ದೇವೆ. ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಶೀಘ್ರ ತೆಗೆದುಕೊಳ್ಳದೆ ಹೋದರೆ ಇಂತಹ ಅವಘಡಗಳನ್ನು ನಾವು ಮತ್ತೆ ಮತ್ತೆ ಎದುರಿಸುತ್ತಿರಬೇಕಾಗುತ್ತದೆ. ನೆಲ, ಜಲ, ಪರಿಸರ ಕುರಿತ ತಜ್ಞರ ವರದಿಗಳನ್ನು ರಾಜಕೀಯ ಕಾರಣಗಳಿಗಾಗಿ ನಮ್ಮ ಸರ್ಕಾರಗಳು ಉಪೇಕ್ಷಿಸುತ್ತಿರುವುದು ಒಳ್ಳೆಯದಲ್ಲ. ನಮ್ಮ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವ ಜನಸಂಖ್ಯಾ ಸ್ಫೋಟ ತಡೆಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.