ನಕ್ಸಲರು ಅಂಬೇಡ್ಕರ್ ಪ್ರಣೀತ ಸಂವಿಧಾನವನ್ನು ಹಿಂಸಾತ್ಮಕವಾಗಿ ಬುಡಮೇಲು ಮಾಡಿ, ಬಂದೂಕಿನ ಸಾಮ್ರಾಜ್ಯ ಸ್ಥಾಪಿಸಬಯಸುವವರು. ಕಳೆದ ಐವತ್ತು ವರ್ಷಗಳಲ್ಲಿ ಹತ್ತು ಸಾವಿರ ಪೊಲೀಸರನ್ನೂ ನೂರಾರು ನಾಗರಿಕರನ್ನೂ ನಕ್ಸಲರು ಕೊಂದಿರುವುದು ಸರ್ವವಿದಿತ. ನಕ್ಸಲರು ಒಂದು ವೇಳೆ ಅಧಿಕಾರಕ್ಕೆ ಬಂದರೆ, ಇದೇ ವರವರರಾವ್ ಮುಂತಾದ ನಗರವಾಸಿ ನಕ್ಸಲರು, ಮಂತ್ರಿಗಳೋ ರಾಜ ಗುರುಗಳೋ ಆಗಿ ನಮ್ಮೆಲ್ಲರ ಸಕಲ ಸ್ವಾತಂತ್ರ್ಯಗಳನ್ನು ಕಿತ್ತುಕೊಳ್ಳುತ್ತಾರೆ. ಗಣ್ಯರ ಹತ್ಯೆಗೆ ಸಂಚು ಹೂಡಿದರೆಂದು ಪೊಲೀಸರು ಅವರನ್ನು ಬಂಧಿಸಿದರೆ, ಅವರ ಸ್ವಾತಂತ್ರ್ಯದ ಬಗ್ಗೆ ನಮ್ಮ ಬುದ್ಧಿಜೀವಿಗಳೇಕೆ ಚಡಪಡಿಸುತ್ತಾರೆ?