ಜನರಿಗೆ ಸನ್ಮಾರ್ಗದಲ್ಲಿ ಬದುಕುವ ದಾರಿ ತೋರಿಸಬೇಕಾದ ಮಠ– ಮಂದಿರಗಳು, ಪೀಠಾಧಿಪತಿಗಳು ಭಕ್ತರ ದಿಕ್ಕು ತಪ್ಪಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ. ದೇವರು, ಧರ್ಮ, ನಂಬಿಕೆ, ಭಕ್ತಿ, ಆಚರಣೆ, ಹರಕೆಗಳೆಂಬ ಜನರ ಭಾವನಾತ್ಮಕ ವಿಚಾರಗಳನ್ನು ಬಂಡವಾಳ ಮಾಡಿಕೊಂಡು, ಕೆಲವರು ವೈಭವದ ಜೀವನ ನಡೆಸುವುದು ಕಂಡು ಬರುತ್ತಿದೆ.