‘ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ’ಎಂದು ವರ್ಷಗಳ ಹಿಂದೆಯೇ ಎ.ಎಸ್. ಪಾಟೀಲನಡಹಳ್ಳಿ ಮತ್ತು ಉಮೇಶ್ ಕತ್ತಿ ಆರೋಪಿಸಿದ್ದರು. ಪಾಟೀಲ ಪುಟ್ಟಪ್ಪ ಅವರು ಹಲವು ದಶಕಗಳಿಂದ ಈ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಈವರೆಗೂ ಇವರ ಜೊತೆ ಧ್ವನಿಗೂಡಿಸದ ಬಸವರಾಜ ಹೊರಟ್ಟಿ, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ, ಎಚ್.ಕೆ. ಪಾಟೀಲ ಮುಂತಾದವರು ಈಗ ‘ಉತ್ತರಕರ್ನಾಟಕದ ನಿರ್ಲಕ್ಷ್ಯ’ದ ಬಗ್ಗೆ ಬಾಯಿ ಬಿಡುತ್ತಿದ್ದಾರೆ.