ರೈತರ ಬೆಳೆಗೆ ಉತ್ಪಾದನಾ ವೆಚ್ಚ ಕಳೆದು ಶೇಕಡ ಐವತ್ತರಷ್ಟು ಲಾಭ ಸಿಗುವಂತೆ ಬೆಲೆ ನಿಗದಿ ಮಾಡಬೇಕೆಂದು ಸರ್ಕಾರವೇ ನೇಮಿಸಿದ ಸ್ವಾಮಿನಾಥನ್ ಆಯೋಗ ಹೇಳಿದೆ. ಆದರೆ ಸರ್ಕಾರಗಳು ಆಯೋಗದ ವರದಿಯನ್ನು ಜಾರಿಗೊಳಿಸದೆ ‘ಅಮಾವಾಸ್ಯೆ ದಾನ’ ನೀಡಿದಂತೆ ಒಂದಿಷ್ಟು ಬೆಂಬಲ ಬೆಲೆ ಹೆಚ್ಚಿಸಿ ಕೈ ತೊಳೆದುಕೊಳ್ಳುತ್ತಿವೆ. ಇದು ನ್ಯಾಯವೇ?