ತೆರಿಗೆದಾರರ ಹಣದಲ್ಲಿ ಹತ್ತು ಹಲವು ಅನುಕೂಲಗಳನ್ನು ಪಡೆಯುತ್ತಿರುವ ಜನಪ್ರತಿನಿಧಿಗಳು ಜವಾಬ್ದಾರಿಯನ್ನು ಅರಿತುಕೊಂಡು ವರ್ತಿಸುತ್ತಿಲ್ಲ ಎಂಬುದು ವಿಷಾದನೀಯ. ಎಲ್ಲ ಜನಪ್ರತಿನಿಧಿಗಳೂ ಹೀಗಿಲ್ಲ ಎಂಬುದು ಸಮಾಧಾನಪಡುವ ವಿಷಯ. ಸದನದ ಕಲಾಪಕ್ಕೆ ಅಡ್ಡಿಪಡಿಸುವ, ಘೋಷಣೆ ಕೂಗುವ, ಸಭಾಧ್ಯಕ್ಷರ ಪೀಠದ ಮುಂದೆ ಬಂದು ಅಶಿಸ್ತಿನಿಂದ ವರ್ತಿಸುವ ಸಂಸದ, ಶಾಸಕರ ವರ್ತನೆ ನೋಡಿದರೆ ಚರ್ಚಿಲ್ ಅವರ ಮಾತುಗಳು ನೆನಪಾಗುತ್ತವೆ.