ಜಗತ್ತಿಗೇ ಜೀವಕಾರುಣ್ಯವನ್ನು ಬೋಧಿಸಿದ ಬುದ್ಧರ ಪವಿತ್ರ ಸ್ಥಳವಾದ ಬೋಧಗಯಾದ ಮಹಾಬೋಧಿ ಬುದ್ಧಮಂದಿರದಲ್ಲಿ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದರಿಂದ ಉಂಟಾದ ಆತಂಕ ಮರೆಯಾಗುವ ಮುನ್ನವೇ ಮತ್ತೊಂದು ಆತಂಕ ಎದುರಾಗಿದೆ.
ಅದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬೌದ್ಧಮಂದಿರದಲ್ಲಿ ಹೋಮ ನಡೆಸಿರುವುದು (ಪ್ರ.ವಾ ಚಿತ್ರ, ಜುಲೈ 21). ಬುದ್ಧ ಸನ್ನಿಧಿಯಲ್ಲಿ ಹೋಮ ಮಾಡುವ ಮೂಲಕ ಬುದ್ಧಭಾರತವನ್ನು ನಯವಂಚನೆಯಿಂದ ಕೆಡವಲು ಹೊರಟಿರುವುದು ಅಪಾಯಕಾರಿ.
ಹೋಮ ಮುಂತಾದ ಮೌಢ್ಯಪದ್ಧತಿಗಳ ವಿರುದ್ಧ ಬಂಡಾಯ ಸಾರಿದ್ದ ಬುದ್ಧನ ಬೋಧನೆಗಳ ಅರಿವಿನ ಕ್ರಾಂತಿಯನ್ನು ಅರಿಯದೆ ಅನುಕಂಪದ ಸೋಗಿನಲ್ಲಿ ಬುದ್ಧಮಂದಿರದಲ್ಲಿ ಹೋಮ ನಡೆಸಿರುವುದು ಇಡೀ ಬುದ್ಧಭಾರತಕ್ಕೆ ಮಾಡಿದ ಬಹುದೊಡ್ಡ ಅವಮಾನ.