ಬೆಳ್ತಂಗಡಿ ತಾಲ್ಲೂಕಿನ ಕಾಲೇಜು ವಿದ್ಯಾರ್ಥಿ ಮಲೆಕುಡಿಯ ಸಮುದಾಯದ 23 ವರ್ಷದ ವಿಠಲ ಎಂಬ ವಿದ್ಯಾರ್ಥಿಯನ್ನು ಬಂಧಿಸಿದ ಪ್ರಕರಣ ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುವ ವರ್ತನೆಯಂತಿದೆ.
ನಕ್ಸಲೀಯರು ಹಿಂಸೆಯ ಹಾದಿ ತೊರೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲೆಂದು ಸರ್ಕಾರ ಕರೆ ನೀಡುತ್ತದೆ. ಮತ್ತೊಂದೆಡೆ ಆದಿವಾಸಿ ಸುಶಿಕ್ಷಿತನಿಗೆ ನಕ್ಸಲೀಯ ಎಂಬ ಹಣೆಪಟ್ಟಿ ಕಟ್ಟುತ್ತದೆ.
ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ವಿಠಲ ಮಲೆಯಕುಡಿಯ ಯುವಕ ಹಾಗೂ ಅವರ ತಂದೆಯನ್ನು ಬಂಧಿಸಿದ ಕ್ರಮ ಸಮರ್ಥನೀಯವಲ್ಲ. ಸರ್ಕಾರ ತಕ್ಷಣವೇ ಇಬ್ಬರನ್ನು ಬಿಡುಗಡೆ ಮಾಡಬೇಕು.