`ಎಚ್ಡಿಕೆ-ಹೆಗ್ಡೆ ವಾಕ್ಸಮರ~ ತಾರಕಕ್ಕೇರಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇಂತಹ ಅಸಭ್ಯವಾದ ಪರಸ್ಪರ ದೋಷಾರೋಪಗಳ ಪ್ರಭಾವ ಸಮಾಜದ ಮೇಲೆ ಹೇಗಿರಬಹುದೆಂಬುದನ್ನು ಇಬ್ಬರೂ ಯೋಚಿಸಿದ್ದರೆ ಚೆನ್ನಾಗಿರುತ್ತಿತ್ತು. ಅದೇನಿದ್ದರೂ ಪುಕ್ಕಟೆ ಮನರಂಜನೆ ಮಹಾಜನತೆಗೆ ಸಿಗುತ್ತಿದೆ.
ಮಾಜಿ ಮುಖ್ಯಮಂತ್ರಿಯವರ ಅಸಭ್ಯ ಆರೋಪಕ್ಕೆ ನ್ಯಾಯಮೂರ್ತಿ ಹೆಗ್ಡೆಯವರು ಮೌನವಹಿಸುವುದರ ಮೂಲಕ ಪರಿಣಾಮಕಾರಿಯಾದ ಉತ್ತರ ಕೊಡಬಹುದಿತ್ತು. ಹಾಗಾಗದೆ, ನ್ಯಾಯಮೂರ್ತಿಗಳೂ ಕೆಸರೆರೆಚಾಟದ ಸ್ಪರ್ಧೆಯಲ್ಲಿ ತೊಡಗಿರುವುದು ಗಾಬರಿ ಹುಟ್ಟಿಸುವಂತಿದೆ.
ಕಾಚಾ ಹಾಕಿಕೊಂಡು ಕುಸ್ತಿಗೆ ಕರೆದವರ ಜೊತೆ ಕಾದಾಡಲು ಹಿಂಜರಿಯಬೇಕಿಲ್ಲ. ಆದರೆ ಕಾಚಾ ಬಿಚ್ಚಿ ಹಾಕಿ, ತೊಡೆ ತಟ್ಟುತ್ತಾ ಮುಂದೆ ನಿಂತ ಎದುರಾಳಿಗೆ ಶರಣಾಗತನಾಗುವುದೊಂದೇ ಸಭ್ಯಮಾರ್ಗ ಎಂಬ ಸರಳ ಲೋಕಾರೂಢಿ ಸಂಗತಿ ನಮ್ಮ ಬಹುದೊಡ್ಡ ನ್ಯಾಯ ಪಂಡಿತರಿಗೇಕೆ ಹೊಳೆಯಲಿಲ್ಲ?