ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ನಡೆದ ಅನಾಹುತ ರಾಜ್ಯ ಸರ್ಕಾರಕ್ಕೆ ಪಾಠ ಕಲಿಯುವ ಅವಕಾಶ ಒದಗಿಸಿದೆ. ಇನ್ನು ಮುಂದೆ ಯಾವುದೇ ಜಾತಿ, ಮತ, ಧರ್ಮಗಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ, ಮಹಾತ್ಮರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸದಿದ್ದರೆ ಒಳ್ಳೆಯದು.
ಯಾವುದೇ ಜಾತಿ, ಮತ, ಧರ್ಮಗಳ ಮಹಾತ್ಮರ ಜಯಂತಿ ಉತ್ಸವಗಳನ್ನು ಆಸಕ್ತ ಸಂಘ-ಸಂಸ್ಥೆಗಳು ಆಚರಿಸಿಕೊಳ್ಳಲಿ. ಇದರಿಂದ ಸಂವಿಧಾನದ ಜಾತ್ಯತೀತ ನಿಲುವಿಗೂ ಸರ್ಕಾರ ಬದ್ಧವಾಗಿ ನಡೆದುಕೊಂಡಂತಾಗುತ್ತದೆ.