ಪ್ರಶ್ನೆಪತ್ರಿಕೆ ಬಹಿರಂಗಪಡಿಸಿ ಇತ್ತೀಚೆಗೆ ಸೆರೆ ಸಿಕ್ಕ ಶಿವಕುಮಾರಯ್ಯ ತರಹದ ವ್ಯಕ್ತಿಯಿಂದಾಗಿ ಶಿಕ್ಷಣ ವ್ಯವಸ್ಥೆಯು ಹದಗೆಡುತ್ತಿದೆ. ಸರ್ಕಾರಿ ನೌಕರಿಗಳು ಇಂಥವರಿಂದ ಹಣವುಳ್ಳವರ ಪಾಲಾಗುತ್ತಿವೆ.
ಅಯೋಗ್ಯರಿಗೆ ಹೆಚ್ಚು ಸರ್ಕಾರಿ ನೌಕರಿಗಳು ಸಿಗುತ್ತಿವೆ. ಬಡ ಕುಟುಂಬಗಳ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ. ಆದಕಾರಣ ಪ್ರಶ್ನೆಪತ್ರಿಕೆ ಜಾಲದಲ್ಲಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ಮುಂದೆ ಇದು ಮರುಕಳಿಸದಂತೆ ನೋಡಿಕೊಳ್ಳಬೇಕು.